ಡಾ.ಮಾಧುರಿ ಕುಲಕರ್ಣಿ ರವರು ಶ್ರೀ ಗಂಗಾವತಿ ಪ್ರಾಣೇಶ್ ರವರೊಂದಿಗೆ ಮೈಸೂರು ಸಾಹಿತ್ಯ ಸಂಭ್ರಮದ ವೇದಿಕೆಯಲ್ಲಿ "ನಗಿಸುವವನ ಮನದ ಮಾತು" ಗೋಷ್ಠಿಯನ್ನು ನಡೆಸಿಕೊಟ್ಟರು. ತನ್ನನ್ನು ತಾನು ನೋಡಿ ನಗುವುದೇ ನಿಜವಾದ ಹಾಸ್ಯ ಎನ್ನುತ್ತಾ , ಕಣ್ಣಿರುವುದೇ ಓದೋಕ್ಕೆ , ಕಣ್ಣು ಇರುವವರೆಗೆ ಓದಿ ಎನ್ನುತ್ತಾ ವೇದಿಕೆಯಲ್ಲಿ ಹಾಸ್ಯದ ಹೊನಲು ಹರಿಸಿದರು. ಕಾಲೇಜಿನ ಓದಿಗಿಂತ ಬೀಚಿಯವರ ಓದು ನನ್ನನ್ನು ಬದುಕಿಸಿತು ಎಂದರು.