ಕರದಂಟು ನಾಡು ಗೋಕಾಕ್ ಬ್ರಿಟಿಷರ್ ಕಾಲದಿಂದಲೂ ರಾಜಕೀಯವಾಗಿ ತನ್ನ ಪ್ರಾಬಲ್ಯವನ್ನ ಸಾಧಿಸುತ್ತಲೇ ಬಂದಿದ್ದು ಇದೀಗ ಜಾರಕಿಹೊಳಿ ಕುಟುಂಬದ ಪ್ರಾಬಲ್ಯ ಜೋರಾಗಿದೆ. ಇತಿಹಾಸದ ಪುಟಗಳನ್ನ ಕೆಲವು ದಶಕಗಳ ಹಿಂದೆ ತಿರುವಿ ನೋಡಿದಾಗ ಸತ್ಯಪ್ಪ ಸಾಹುಕಾರ, ಜಮಖಂಡಿ ಸಾಹುಕಾರ್, ಅರಭಾವಿ ವಡ್ಡರ ಸತ್ಯಪ್ಪ ಸಾಹುಕಾರ ಹೆಸರು ಪ್ರತಿಧ್ವನಿಸುತ್ತದೆ. ಜಾರಕಿಹೊಳಿ ಸಾಮ್ರಾಜ್ಯಕಿಂತಲೂ ಸತ್ಯಪ್ಪ ಸಾಹುಕಾರನ ಸಾಮ್ರಾಜ್ಯ ಭಾರಿ ಪವರಫುಲ್ ಆಗಿತ್ತು. ಬ್ರಿಟಿಷ ರಾಜರಿಂದ ರಾಜ ಚಕ್ರವತರ್ಿ ಎಂಬ ಬಿರುದು ಸತ್ಯಪ್ಪ ಸಾಹುಕಾರಗೆ ಸಿಕ್ಕಿತ್ತು ಎಂದರೆ ಅರಭಾವಿ ಸತ್ಯಪ್ಪ ಸಾಹುಕಾರನ್ ಸಾಮ್ರಾಜ್ಯ ಹೇಗಿರಬಹುದು ಎಂಬುದು ಗೊತ್ತಾಗುತ್ತದೆ.